Public Prime News

CLEAR VISION, TRUE MISSION

ಬ್ರೇಕಿಂಗ್: ದುಬೈನಲ್ಲಿ ಉದ್ಯಮ, ಕೋಟ್ಯಂತರ ರೂ. ಆಸ್ತಿ: ಕೆಪಿಎಸ್‌ಸಿ ಅಕ್ರಮದ ಕಿಂಗ್‌ಪಿನ್ ಕನ್ನಾಳೆ ಕರಾಳ ಮುಖ..!
crime

ಬ್ರೇಕಿಂಗ್: ದುಬೈನಲ್ಲಿ ಉದ್ಯಮ, ಕೋಟ್ಯಂತರ ರೂ. ಆಸ್ತಿ: ಕೆಪಿಎಸ್‌ಸಿ ಅಕ್ರಮದ ಕಿಂಗ್‌ಪಿನ್ ಕನ್ನಾಳೆ ಕರಾಳ ಮುಖ..!

Public Prime News

Public Prime News

Reported by Public Prime News

ಬೆಂಗಳೂರು:

ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿರುವ ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದ್ದು, ಪ್ರಕರಣದ ಪ್ರಮುಖ ಆರೋಪಿ ಬಸವರಾಜ ಕನ್ನಾಳೆ ಕುರಿತಾದ ದಂಗುಬಡಿಸುವ ಮಾಹಿತಿಗಳು ಸಿಐಡಿ ತನಿಖೆಯಿಂದ ಹೊರಬಂದಿವೆ. 


ಕೇವಲ ಆರು ವರ್ಷಗಳ ಹಿಂದೆ ಸಾಮಾನ್ಯ ಉದ್ಯೋಗಿಯಾಗಿದ್ದ ಈತ, ವಾಮಮಾರ್ಗದ ಮೂಲಕ ಕೋಟ್ಯಂತರ ರೂ. ಸಂಪಾದಿಸಿ ಈಗ ಬರೋಬ್ಬರಿ ₹100 ಕೋಟಿಗೂ ಅಧಿಕ ಮೌಲ್ಯದ ಆಸ್ತಿಯ ಒಡೆಯನಾಗಿದ್ದಾನೆ ಎಂಬುದು ತನಿಖೆಯಲ್ಲಿ ಬಹಿರಂಗಗೊಂಡಿದೆ.


ಸಾಮಾನ್ಯ ಕೆಲಸಗಾರನಿಂದ ಕೋಟ್ಯಧಿಪತಿ ವರೆಗಿನ ಹಾದಿ


  • ಕನಿಷ್ಠ ವೇತನದಿಂದ ಶುರುವಾದ ಬದುಕು: 

  • 2020ರ ಕೊರೊನಾ ಸಮಯದಲ್ಲಿ ರಾಜಾನುಕುಂಟೆ ಸಮೀಪದ ಬಾಳೆಕಾಯಿ ಮಂಡಿಯಲ್ಲಿ ರೈಟರ್ ಆಗಿ ಕೆಲಸ ಮಾಡುತ್ತಿದ್ದ ಬಸವರಾಜ ಕನ್ನಾಳೆ, ತಿಂಗಳಿಗೆ ಕೇವಲ ₹20,000 ಆಸುಪಾಸಿನಲ್ಲಿ ಸಂಬಳ ಪಡೆಯುತ್ತಿದ್ದ.


  • ಪ್ರಭಾವಿಗಳ ನಂಟು ಹಾಗೂ ಹಗರಣದ ನೂಲು: 

  • ಕೊರೊನಾ ಬಳಿಕ ಪ್ರಭಾವಿ ರಾಜಕಾರಣಿಗಳ ಒಡನಾಟ ಬೆಳೆಸಿಕೊಂಡ ಕನ್ನಾಳೆ, ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರಾಗಿದ್ದ ಹಳೆಯ ಸ್ನೇಹಿತ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರೊಂದಿಗೆ ಕೈಜೋಡಿಸಿ ನೇಮಕಾತಿ ಅಕ್ರಮಗಳನ್ನು ವ್ಯವಸ್ಥಿತ ಜಾಲವನ್ನಾಗಿ ಬದಲಾಯಿಸಿಕೊಂಡ.


ದುಬೈನಲ್ಲಿ ಉದ್ಯಮ ಹಾಗೂ ಕೋಟಿ ಕೋಟಿ ಹೂಡಿಕೆ


  • ಅಕ್ರಮ ಹಣ ವಿದೇಶಕ್ಕೆ ವರ್ಗಾವಣೆ: 

  • ಪರೀಕ್ಷೆಗಳಲ್ಲಿ ಅಕ್ರಮ ಎಸಗಿ, ನೌಕರಿ ಕೊಡಿಸುವುದಾಗಿ ಅಭ್ಯರ್ಥಿಗಳಿಂದ ಕೋಟ್ಯಂತರ ರೂ. ಲೂಟಿ ಮಾಡಿರುವ ಕನ್ನಾಳೆ, ಆ ಹಣವನ್ನು ರಿಯಲ್ ಎಸ್ಟೇಟ್, ಟ್ರಾವೆಲ್ಸ್ ಹಾಗೂ ಬಡ್ಡಿ ವ್ಯವಹಾರಗಳಲ್ಲಿ ತೊಡಗಿಸಿದ್ದಾನೆ.


  • ದುಬೈನಲ್ಲಿ ಹೋಟೆಲ್ ಮತ್ತು ಬ್ಯುಸಿನೆಸ್:

  • ಅಕ್ರಮವಾಗಿ ಸಂಪಾದಿಸಿದ ಕಪ್ಪು ಹಣವನ್ನು ಬಳಸಿ ಕನ್ನಾಳೆ ದುಬೈನಲ್ಲಿ ಹೋಟೆಲ್ ಸೇರಿದಂತೆ ವಿವಿಧ ಉದ್ಯಮಗಳನ್ನು ಆರಂಭಿಸಿರುವ ಶಂಕೆಯಿರುವುದಾಗಿ ಸಿಐಡಿ ಮೂಲಗಳು ತಿಳಿಸಿವೆ.


ಬಾಗಲಕೋಟೆ, ಬೀದರ್ ಸೇರಿದಂತೆ ತವರು ಜಿಲ್ಲೆಯಲ್ಲಿಯೂ ಅಪಾರ ಪ್ರಮಾಣದ ಕೃಷಿ ಜಮೀನು ಹಾಗೂ ಐಷಾರಾಮಿ ಡೇರಿ ಫಾರ್ಮ್‌ಗಳನ್ನು ನಿರ್ಮಿಸಿರುವ ಈತನ ಆರ್ಥಿಕ ಜಾಲದ ಬಗ್ಗೆ ತನಿಖಾಧಿಕಾರಿಗಳು ತೀವ್ರ ಶೋಧ ನಡೆಸುತ್ತಿದ್ದಾರೆ.

Share this story