Public Prime News

CLEAR VISION, TRUE MISSION

ತ್ಯಾಜ್ಯ ವಿಂಗಡಿಸದಿದ್ದರೆ ನೀರು, ವಿದ್ಯುತ್ ಬಂದ್.! ಕಾರ್ಕಳ ಪುರಸಭೆಯಿಂದ ಹೊಸ ಆದೇಶ ಜಾರಿ..!
karkala

ತ್ಯಾಜ್ಯ ವಿಂಗಡಿಸದಿದ್ದರೆ ನೀರು, ವಿದ್ಯುತ್ ಬಂದ್.! ಕಾರ್ಕಳ ಪುರಸಭೆಯಿಂದ ಹೊಸ ಆದೇಶ ಜಾರಿ..!

Public Prime News

Public Prime News

Reported by Public Prime News

ಕಾರ್ಕಳ: 

ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲು ಮುಂದಾಗಿರುವ ಪುರಸಭೆಯು ಸಾರ್ವಜನಿಕರಿಗೆ ಅತ್ಯಂತ ಕಠಿಣ ಎಚ್ಚರಿಕೆಯೊಂದನ್ನು ನೀಡಿದೆ. ಇನ್ಮುಂದೆ ಸಾರ್ವಜನಿಕರು ಹಾಗೂ ವಾಣಿಜ್ಯ ಸಂಸ್ಥೆಗಳು ತಮ್ಮ ಮನೆಯ ಅಥವಾ ಅಂಗಡಿಯ ತ್ಯಾಜ್ಯವನ್ನು (ಕಸ) ಕಡ್ಡಾಯವಾಗಿ ಹಸಿ ಕಸ ಮತ್ತು ಒಣ ಕಸ ಎಂದು ಪ್ರತ್ಯೇಕವಾಗಿ ವಿಂಗಡಿಸಿ ಪುರಸಭೆಯ ಕಸ ಸಂಗ್ರಹಣಾ ವಾಹನಗಳಿಗೆ ನೀಡಬೇಕಾಗುತ್ತದೆ. ಒಂದು ವೇಳೆ ಈ ನಿಯಮವನ್ನು ಉಲ್ಲಂಘಿಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪುರಸಭೆ ತಿಳಿಸಿದೆ.


  • ಕಡ್ಡಾಯ ತ್ಯಾಜ್ಯ ವಿಂಗಡಣೆ: 

  • ಪ್ರತಿಯೊಬ್ಬ ನಾಗರಿಕರು ತಮ್ಮ ದಿನನಿತ್ಯದ ಕಸವನ್ನು ಹಸಿ ತ್ಯಾಜ್ಯ ಮತ್ತು ಒಣ ತ್ಯಾಜ್ಯ ಎಂಬುದಾಗಿ ಪ್ರತ್ಯೇಕಿಸಿ ಬಕೆಟ್‌ಗಳಲ್ಲಿ ಅಥವಾ ಬ್ಯಾಗ್‌ಗಳಲ್ಲಿ ಇಟ್ಟುಕೊಂಡು, ಪುರಸಭೆಯ ಸ್ವಚ್ಛತಾ ವಾಹನ ಬಂದಾಗ ನೀಡಬೇಕು. ಎರಡನ್ನೂ ಒಟ್ಟಿಗೆ ಬೆರೆಸಿ ನೀಡುವಂತಿಲ್ಲ.


  • ಸಂಪರ್ಕ ಕಡಿತದ ಎಚ್ಚರಿಕೆ:

  • ಪುರಸಭೆಯ ಕಟ್ಟುನಿಟ್ಟಿನ ಸೂಚನೆಯ ಹೊರತಾಗಿಯೂ ಯಾರು ಕಸವನ್ನು ವಿಂಗಡಿಸಿ ನೀಡುವುದಿಲ್ಲವೋ, ಅಂತಹ ಮನೆಗಳು ಮತ್ತು ವಾಣಿಜ್ಯ ಸಂಕೀರ್ಣಗಳ ಕುಡಿಯುವ ನೀರಿನ ಸಂಪರ್ಕ (Water Connection) ಹಾಗೂ ವಿದ್ಯುತ್ ಸಂಪರ್ಕವನ್ನು (Electricity Connection) ಯಾವುದೇ ಮುನ್ಸೂಚನೆ ಇಲ್ಲದೆ ಕಡಿತಗೊಳಿಸಲಾಗುವುದು ಎಂದು ಪುರಸಭೆಯ ಆಡಳಿತ ಮಂಡಳಿ ಕಠಿಣ ಎಚ್ಚರಿಕೆ ನೀಡಿದೆ.


  • ದಂಡ ವಿಧಿಸುವ ಮುನ್ಸೂಚನೆ: 

  • ನಿಯಮ ಉಲ್ಲಂಘಿಸುವ ಸಾರ್ವಜನಿಕರಿಗೆ ಕೇವಲ ಸಂಪರ್ಕ ಕಡಿತಗೊಳಿಸುವುದು ಮಾತ್ರವಲ್ಲದೆ, ಪರಿಸರ ಮಾಲಿನ್ಯ ಕಾಯ್ದೆಯಡಿ ಭಾರೀ ಪ್ರಮಾಣದ ದಂಡವನ್ನು ವಿಧಿಸಲು ಪುರಸಭೆ ನಿರ್ಧರಿಸಿದೆ.


ಕಾರ್ಕಳ ನಗರವನ್ನು ಸಂಪೂರ್ಣ ಕಸಮುಕ್ತ ಹಾಗೂ ಸ್ವಚ್ಛ ನಗರವನ್ನಾಗಿ ಮಾಡಲು ಸಾರ್ವಜನಿಕರು ಕಡ್ಡಾಯವಾಗಿ ಪುರಸಭೆಯೊಂದಿಗೆ ಸಹಕರಿಸಬೇಕು ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Share this story