ಪಡಿತರ ಚೀಟಿದಾರರ ಆರೋಗ್ಯ ಹಿತಾಸಕ್ತಿ ಮತ್ತು ಪೌಷ್ಟಿಕಾಂಶದ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಈ ಮಹತ್ವದ ಹೆಜ್ಜೆಯನ್ನು ಇಡಲಾಗಿದೆ.
ಅಕ್ಕಿ ಬದಲಿಗೆ ಕಿಟ್ನಲ್ಲಿ ಏನೇನು ಇರಲಿದೆ..?
ಕೇವಲ ಧಾನ್ಯಗಳ ಸೇವನೆಯಿಂದ ಉಂಟಾಗುತ್ತಿರುವ ಆರೋಗ್ಯ ಸಮಸ್ಯೆಗಳಿಗೆ ಕಡಿವಾಣ ಹಾಕಲು ಮತ್ತು ಸಮತೋಲಿತ ಆಹಾರವನ್ನು ಒದಗಿಸಲು ಈ ಕಿಟ್ ರೂಪಿಸಲಾಗಿದೆ. ಈ ‘ಇಂದಿರಾ ಪೌಷ್ಟಿಕ ಕಿಟ್’ನಲ್ಲಿ ಈ ಕೆಳಗಿನ ಪದಾರ್ಥಗಳು ಲಭ್ಯವಿರಲಿವೆ:
ಕುಟುಂಬದ ಗಾತ್ರಕ್ಕನುಗುಣವಾಗಿ ಕಿಟ್ ವಿತರಣೆ:
ಎಲ್ಲಾ ಕುಟುಂಬಗಳಿಗೂ ಒಂದೇ ಪ್ರಮಾಣದ ಕಿಟ್ ನೀಡುವ ಬದಲು, ಆಯಾ ಕುಟುಂಬದಲ್ಲಿರುವ ಸದಸ್ಯರ ಸಂಖ್ಯೆಯ ಆಧಾರದ ಮೇಲೆ (Slabs) ಕಿಟ್ಗಳನ್ನು ವಿತರಿಸಲಾಗುವುದು:
1 ರಿಂದ 2 ಸದಸ್ಯರು ಇರುವ ಕುಟುಂಬಕ್ಕೆ:
ಅರ್ಧ ಕೆಜಿಯ ಕಿಟ್.
3 ರಿಂದ 4 ಸದಸ್ಯರು ಇರುವ ಕುಟುಂಬಕ್ಕೆ:
1 ಕೆಜಿ ತೂಕದ ಕಿಟ್.
5 ಅಥವಾ ಅದಕ್ಕಿಂತ ಹೆಚ್ಚು ಸದಸ್ಯರು ಇರುವ ಕುಟುಂಬಕ್ಕೆ:
1.5 ಕೆಜಿ ತೂಕದ ಕಿಟ್ ವಿತರಣೆ.
ಈ ಬದಲಾವಣೆಗೆ ಪ್ರಮುಖ ಕಾರಣಗಳೇನು..?
1.
ಕೇವಲ ಕಾರ್ಬೋಹೈಡ್ರೇಟ್ಸ್ಯುಕ್ತ ಅಕ್ಕಿಯ ಸೇವನೆಯಿಂದ ಬೊಜ್ಜು ಮತ್ತು ಇತರೆ ಅನಾರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವುದನ್ನು ತಜ್ಞರು ಗಮನಿಸಿದ್ದು, ಪ್ರೊಟೀನ್ ಹಾಗೂ ಕೊಬ್ಬಿನಾಂಶವಿರುವ ಆಹಾರವನ್ನು ಸೇರಿಸಲು ಈ ಕ್ರಮ ಕೈಗೊಳ್ಳಲಾಗಿದೆ.
2. ಸಾರ್ವಜನಿಕರ ಅಭಿಪ್ರಾಯ:
ಸರ್ಕಾರದ ಸಮೀಕ್ಷೆಯೊಂದರಲ್ಲಿ ಶೇ.
3.ಪಾರದರ್ಶಕತೆ ಮತ್ತು ದುರ್ಬಳಕೆ ತಡೆ:
ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ತಡೆಯಲು ಮತ್ತು ವಿತರಣೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಲು ಈ ಹೊಸ ವ್ಯವಸ್ಥೆ ಸಹಕಾರಿಯಾಗಲಿದೆ.
ರಾಜ್ಯದ ಸುಮಾರು 1.26 ಕೋಟಿಗೂ ಅಧಿಕ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ದಾರರಿಗೆ ಈ ಯೋಜನೆಯ ನೇರ ಲಾಭ ಸಿಗಲಿದ್ದು, ಸದ್ಯದಲ್ಲೇ ನ್ಯಾಯಬೆಲೆ ಅಂಗಡಿಗಳ ಮೂಲಕ ಈ ಕಿಟ್ಗಳ ವಿತರಣೆ ಅಧಿಕೃತವಾಗಿ ಆರಂಭವಾಗಲಿದೆ.


