ಕ್ಷೇತ್ರದ ಪಾವಿತ್ರ್ಯತೆ ಮತ್ತು ದಿವ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಆಡಳಿತ ಮಂಡಳಿಯು ಈ ಕೆಳಗಿನ ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಭಕ್ತರು ಇವುಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸೂಚಿಸಿದೆ.
ಮೊಬೈಲ್ ಬ್ಯಾನ್:
ದೇವಸ್ಥಾನದ ಒಳಗೆ ಮೊಬೈಲ್ ಬಳಕೆ ಮತ್ತು ಫೋಟೋ/ವಿಡಿಯೋ ತೆಗೆಯುವುದು ಕಂಪ್ಲೀಟ್ ನಿಷೇಧ.
ಡ್ರೆಸ್ ಕೋಡ್:
ಕಡ್ಡಾಯವಾಗಿ ಭಾರತೀಯ ಸಾಂಪ್ರದಾಯಿಕ ಉಡುಪು ಮಾತ್ರ ಧರಿಸಬೇಕು.
ನೋ ಚರ್ಮದ ವಸ್ತುಗಳು:
ಲೆದರ್ ಬೆಲ್ಟ್, ಪರ್ಸ್ ಹಾಗೂ ಛತ್ರಿ, ಕೋಲುಗಳನ್ನು ಒಳಗೆ ತರುವಂತಿಲ್ಲ.
ನೋ ಎಳನೀರು/ತಂಬಾಕು:
ರಥಬೀದಿ ಮತ್ತು ನಂದಿನಿ ನದಿ ಆವರಣದಲ್ಲಿ ಎಳನೀರು ಕುಡಿಯುವುದು, ಧೂಮಪಾನ ಹಾಗೂ ಗುಟ್ಕಾ ನಿಷೇಧಿಸಲಾಗಿದೆ.
ಮಲ್ಲಿಗೆ ಹೂವಿನ ನಿಯಮ:
ದೇವಿಗೆ ತರುವ ಮಲ್ಲಿಗೆ ಹೂವನ್ನು ಕೇವಲ ಬಾಳೆ ನಾರಿನಿಂದ (ಹಗ್ಗ) ಮಾತ್ರ ಕಟ್ಟಿರಬೇಕು.
ಪ್ರವೇಶ ನಿರ್ಬಂಧ:
7 ತಿಂಗಳ ಮೇಲ್ಪಟ್ಟ ಗರ್ಭಿಣಿಯರಿಗೆ ಪ್ರವೇಶವಿಲ್ಲ.
ಮುಟ್ಟಿನ 5 ದಿನಗಳು ಹಾಗೂ ಜನನ-ಮರಣ ಸೂತಕದ ಅವಧಿಯಲ್ಲಿ ಬರಬಾರದು.
ಮಾಂಸಾಹಾರ/ಮದ್ಯಪಾನ ಮಾಡಿದವರಿಗೆ ದರ್ಶನವಿಲ್ಲ (ಸ್ನಾನ ಕಡ್ಡಾಯ).
ವಿಶೇಷ ದಿನ: ಏಕಾದಶಿಯಂದು ಯಾವುದೇ ವಿಶೇಷ ಪೂಜೆ ಇರುವುದಿಲ್ಲ.
(ಗಮನಿಸಿ: ವಾರಾಂತ್ಯದಲ್ಲಿ ಜನಸಂದಣಿ ಇರುವುದರಿಂದ ಅನ್ನಪ್ರಸಾದ ಮತ್ತು ವಸತಿ ವ್ಯವಸ್ಥೆಯಲ್ಲಿ ವ್ಯತ್ಯಾಸವಾದರೆ ಸಹಕರಿಸಲು ಕೋರಲಾಗಿದೆ).


