Public Prime News

CLEAR VISION, TRUE MISSION

 BIG BREAKING: ರೇಣುಕಾಸ್ವಾಮಿ ಕೊಲೆ ಪ್ರಕರಣ: ಪ್ರದೂಷ್ ಮಾಫಿ ಸಾಕ್ಷಿ ಆದೇಶ ರದ್ದುಗೊಳಿಸಿದ ಹೈಕೋರ್ಟ್..!
crime

BIG BREAKING: ರೇಣುಕಾಸ್ವಾಮಿ ಕೊಲೆ ಪ್ರಕರಣ: ಪ್ರದೂಷ್ ಮಾಫಿ ಸಾಕ್ಷಿ ಆದೇಶ ರದ್ದುಗೊಳಿಸಿದ ಹೈಕೋರ್ಟ್..!

Public Prime News

Public Prime News

Reported by Public Prime News

ಬೆಂಗಳೂರು:

ರಾಜ್ಯಾದ್ಯಂತ ಸಂಚಲನ ಮೂಡಿಸಿರುವ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. 


ಪ್ರಕರಣದ 14ನೇ ಆರೋಪಿಯಾಗಿದ್ದ ಪ್ರದೂಷ್‌ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಿ ಸೆಷನ್ಸ್‌ ಕೋರ್ಟ್ ನೀಡಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ. ಈ ಬೆಳವಣಿಗೆಯಿಂದ ನಟ ದರ್ಶನ್ ಹಾಗೂ ಇತರ ಆರೋಪಿಗಳಿಗೆ ಕಾನೂನು ಸಮರದಲ್ಲಿ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.


ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಸೇರಿದಂತೆ ಹಲವರು ಆರೋಪಿಗಳಾಗಿದ್ದಾರೆ. ಈ ನಡುವೆ, ಪ್ರಕರಣದ 14ನೇ ಆರೋಪಿ ಪ್ರದೂಷ್‌ ತಾನು ಮಾಫಿ ಸಾಕ್ಷಿಯಾಗಲು ಇಚ್ಛಿಸುವುದಾಗಿ ಕೋರಿ ಕೆಳಹಂತದ ನ್ಯಾಯಾಲಯಕ್ಕೆ (ಸೆಷನ್ಸ್‌ ಕೋರ್ಟ್) ಅರ್ಜಿ ಸಲ್ಲಿಸಿದ್ದನು. 


ಇದನ್ನು ಪುರಸ್ಕರಿಸಿದ್ದ ವಿಚಾರಣಾ ನ್ಯಾಯಾಲಯ, ಪ್ರದೂಷ್‌ಗೆ ಕ್ಷಮಾದಾನ ನೀಡಿ ಸರ್ಕಾರದ ಸಾಕ್ಷಿಯನ್ನಾಗಿ (ಅಪ್ರೂವರ್) ಬದಲಾಯಿಸಿತ್ತು. ವಿಚಾರಣಾ ನ್ಯಾಯಾಲಯದ ಈ ಕ್ರಮವನ್ನು ಪ್ರಶ್ನಿಸಿ ನಟ ದರ್ಶನ್‌ ಪರ ವಕೀಲರು ಹೈಕೋರ್ಟ್ ಮೆಟ್ಟಿಲೇರಿದ್ದರು.


ಹೈಕೋರ್ಟ್ ಆದೇಶದ ಪ್ರಮುಖ ಮುಖ್ಯಾಂಶಗಳು:


  • ಪ್ರೊಬೇಷನ್ ವರದಿ ಬಗ್ಗೆ ಆಕ್ಷೇಪ:

  • ಸೆಷನ್ಸ್‌ ಕೋರ್ಟ್‌ ಪ್ರೊಬೇಷನ್ ವರದಿ ಪಡೆದ ರೀತಿಯನ್ನು ಹೈಕೋರ್ಟ್ ತನ್ನ ಆದೇಶದಲ್ಲಿ ತೀವ್ರವಾಗಿ ಪ್ರಶ್ನಿಸಿದೆ.


  • ಮರು ಆದೇಶಕ್ಕೆ ಸೂಚನೆ: 

  • ಪ್ರಕರಣದ ವಿಚಾರಣೆಯನ್ನು ಮತ್ತೆ ದೀರ್ಘಕಾಲ ಮುಂದುವರಿಸದೆ, ಮುಂದಿನ ಕೇವಲ ಒಂದು ವಾರದೊಳಗೆ ಕಾನೂನುಬದ್ಧವಾಗಿ ಹೊಸ ಆದೇಶ ಹೊರಡಿಸುವಂತೆ ಹೈಕೋರ್ಟ್ ಸೆಷನ್ಸ್‌ ಕೋರ್ಟ್‌ಗೆ ತಾಕೀತು ಮಾಡಿದೆ.


  • ದರ್ಶನ್‌ಗೆ ಕಾನೂನು ಮುನ್ನಡೆ: 

  • ಪ್ರದೂಷ್‌ ಮಾಫಿ ಸಾಕ್ಷಿಯಾಗುವುದರಿಂದ ತನಿಖೆ ಮತ್ತು ವಿಚಾರಣೆಯ ದಿಕ್ಕೇ ಬದಲಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದ ದರ್ಶನ್‌ ಕಾನೂನು ಬಳಗಕ್ಕೆ, ಹೈಕೋರ್ಟ್‌ನ ಈ ತೀರ್ಪು ತಾತ್ಕಾಲಿಕ ರಿಲೀಫ್ ತಂದುಕೊಟ್ಟಿದೆ.


ಮಾಫಿ ಸಾಕ್ಷಿ ವಿಚಾರದಲ್ಲಿ ಕೆಳಮನೆ ಕೋರ್ಟ್ ಅನುಸರಿಸಿದ ಪ್ರಕ್ರಿಯೆಗಳಲ್ಲಿ ಲೋಪವಿರುವುದನ್ನು ಮನಗಂಡಿರುವ ಉಚ್ಛ ನ್ಯಾಯಾಲಯ, ಈಗ ಚೆಂಡನ್ನು ಮತ್ತೆ ಸೆಷನ್ಸ್‌ ಕೋರ್ಟ್‌ನಂಗಳಕ್ಕೇನೇ ವಾಪಸ್ ಕಳುಹಿಸಿದೆ. 


ಒಟ್ಟಾರೆಯಾಗಿ, ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಹೈಕೋರ್ಟ್‌ನ ಈ ತೀರ್ಪು ಮುಂದಿನ ಕಾನೂನು ಹೋರಾಟದ ದಿಕ್ಸೂಚಿಯಾಗಲಿದೆ.

Share this story